2014 Sri Anantha Padmanabha Vrata / ಶ್ರೀ ಅನಂತ ಪದ್ಮನಾಭ ವ್ರತ ಮತ್ತು ಉದ್ಯಾಪನೆ
ಭಕ್ತಾದಿಗಳ ಕೋರಿಕೆ ಮೇರೆಗೆ ಕಳೆದ ವರ್ಷಗಳಲ್ಲಿ ನೆರವೇರಿಸಿದಂತೆ, ಈ ವರ್ಷವೂ ಶ್ರೀ ಜಯ ನಾಮ
ಸಂವತ್ಸರದ ಭಾದ್ರಪದ ಶುದ್ಧ ಚತುರ್ದಶಿಯಂದು –
- 07-09-2014 ಭಾನುವಾರ ಶ್ರೀ ಅನಂತಪದ್ಮನಾಭ ವ್ರತ
- 08-09-2014 ಸಂಜೆ 6 ರಿಂದ ಉದ್ಯಾಪನಾ ಕಾರ್ಯಕ್ರಮ ಪ್ರಾರಂಭ
- 08-09-2014 ಸೋಮವಾರ ಬೆಳಗ್ಗೆ ಹೋಮ, ದಂಪತಿ ಪೂಜೆ.
- ಅನಂತಪದ್ಮನಾಭ ಪೂಜಾ ಸಂಕಲ್ಪ 100-00 ರೂ.
- ಅನಂತಪದ್ಮನಾಭ ವ್ರತ ಕರ್ತರಿಗೆ 500-00 ರೂ.
- ಅನಂತಪದ್ಮನಾಭವ್ರತ ಉದ್ಯಾಪನೆ 5000-00 ರೂ.
ವ್ರತ ಮತ್ತು ಉದ್ಯಾಪನೆ ಮಾಡುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಪ್ರಾರ್ಥನೆ. ದೇವಸ್ಥಾನದ ವತಿಯಿಂದ
ಎರಡು ಕಳಶ, ವಸ್ತ್ರ, ಅನಂತನ ದಾರವನ್ನು ಕೊಡಲಾಗುವುದು. ಪೂಜೆಗೆ ಕೂರುವ ದಂಪತಿಗಳಿಗೆ ಹಾಗೂ ದಂಪತಿ ಪೂಜೆ
ಆಹ್ವಾನಿತರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಜನ ಬಂದಲ್ಲಿ ಪ್ರತ್ಯೇಕ ಹಣವನ್ನು ನೀಡಬೇಕಾಗುತ್ತದೆ.
ಸೂಚನೆ: ಅನಂತ ವ್ರತ 07-09-2014 ರಂದು ಬೆಳಗ್ಗೆ 7ಗಂಟೆಗೆ ಪ್ರಾರಂಭವಾಗಿ 12ಗಂಟೆಗೆ ಮಹಾಪ್ರಸಾದ ವಿನಿಯೋಗವಿರುತ್ತದೆ.
ಭಕ್ತಾದಿಗಳ ಕೋರಿಕೆ ಮೇರೆಗೆ ಉದ್ಯಾಪನೆ ಕಾರ್ಯಕ್ರಮವನ್ನು 07-09-2014ರಂದು ಸಂಜೆ 5ಗಂಟೆಗೆ ಪ್ರಾರಂಭಿಸಿ,
ರಾತ್ರಿ 10ಗಂಟೆಗೆ 3ಯಾಮದ ಪೂಜೆಯನ್ನು ಮಾಡಲಾಗುವುದು. ನಂತರ 4ನೇ ಯಾಮದ ಪೂಜೆಯನ್ನು
8-9-2014ರಂದು ಬೆಳಗ್ಗೆ 6ಗಂಟೆಯಿಂದ 7.30ರವರೆಗೂ ಮಾಡಿ ನಂತರ ಉದ್ಯಾಪನೆ ಹೋಮ, ನಂತರ
ಪುನಃಪೂಜೆಯನ್ನು ಮಾಡಿ, ಕಳಶವನ್ನು ವಿಸರ್ಜಿಸಲಾಗುವುದು. ಅದಾದ ನಂತರ ದಂಪತಿ ಪೂಜೆ ಏರ್ಪಡಿಸಿರಲಾಗುತ್ತದೆ.
12ಗಂಟೆಗೆ ಮಹಾಪ್ರಸಾದ ವಿನಿಯೋಗ.
ಭಕ್ತಾದಿಗಳು ತರಬೇಕಾದ ಸಾಮಗ್ರಿಗಳ ವಿವರವನ್ನು ನೋಂದಣಿ ಸಮಯದಲ್ಲಿ ಪಡೆಯತಕ್ಕದ್ದು.